ಪ್ರತ್ಯೇಕ ಘಟನೆ ಇಬ್ಬರ ಆತ್ಮಹತ್ಯೆ
ಶಂಕರನಾರಾಯಣ, ನ.20: ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಕೊಡ್ಲಾಡಿ ಸಾಲಿಮಕ್ಕಿ ಬಾಂಡ್ಯದ ಕುಷ್ಟ ನಾಯ್ಕ ಎಂಬವರ ಪುತ್ರ ಸುರೇಶ್ ಎಂಬಾತ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನ.19ರಂದು ಸಾಲಿಮಕ್ಕಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ತೆಗ್ಗರ್ಸೆ ಗ್ರಾಮದ ಬೆಟ್ಟನಗದ್ದೆ ಚಂದಣ ನಿವಾಸಿ ಮಹಾಬಲ ಗಾಣಿಗ (74) ಇವರು ಮಾನಸಿಕ ಕಾಯಿಲೆ ಹಾಗೂ ಮಧುಮೇಹ, ಬಿಪಿ ಕಾಯಿಲೆಯಿಂದ ಬೇಸತ್ತು ಇಂದು ಬೆಳಗ್ಗೆ 7ರಿಂದ 8ಗಂಟೆಯ ನಡುವಿನ ಅವಧಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story