ಕಾರ್ಮೆಲ್: ಭಗಿನಿಯರ ಪ್ರತಿಜ್ಞಾ ಸ್ವೀಕಾರ
ಮಂಗಳೂರು, ಡಿ. 8: ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ 16 ಭಗಿನಿಯರು ತಮ್ಮ ಧಾರ್ಮಿಕ ಜೀವನದ ಶಾಶ್ವತ ಪ್ರತಿಜ್ಞೆಯನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ದಾನ್ಹ ಹಾಗೂ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಮಹಾ ಅಧಿಕಾರಿ ಭಗಿನಿ ಸುಶೀಲಾ ಎ.ಸಿ. ಅವರ ಸಮ್ಮುಖದಲ್ಲಿ ನಗರದ ಮೇರಿಹಿಲ್ ಕಾನ್ವೆಂಟ್ನ ದೇವಾಲಯದಲ್ಲಿ ಸ್ವೀಕರಿಸಿದರು.
ಸಮಾರಂಭದಲ್ಲಿ ಸುಮಾರು 13 ಪೂಜ್ಯ ಗುರುಗಳು, ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಹಲವು ಭಗಿನಿಯರು ಮತ್ತು ಶಾಶ್ವತ ಪ್ರತಿಜ್ಞೆ ಮಾಡಿದ ಭಗಿನಿಯರ ಹೆತ್ತವರು, ಬಂಧು ಬಳಗದವರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
Next Story