ಉಳ್ಳಾಲ: ಉಚಿತ ಕಣ್ಣು ತಪಾಸಣಾ ಶಿಬಿರ
ಉಳ್ಳಾಲ: ಸಯ್ಯದ್ ಮದನಿ ದರ್ಗಾ ಮತ್ತು ಡೆಲ್ಟಾ ಐ.ಕೇರ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ಮತ್ತು ಹಿಜಾಮಾ ಚಿಕಿತ್ಸೆ ಉಳ್ಳಾಲ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಉಳ್ಳಾಲದ ಬಡಜನರಿಗೆ ಸಹಾಯವಾಗಲಿ ಎಂಬ ದೃಷ್ಠಿಯಿಂದ ಉಚಿತ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಡಾ. ಶೀತಲ್ ರಾಯ್, ಡಾ. ಸಯ್ಯದ್ ವಸೀಂ, ಡಾ. ಭರತ್ ಕುಮಾರ್, ಮೂಳೆ ತಜ್ಞ ರಾಮ್ ಪ್ರಸಾದ್, ಡಾ. ನಝೀರ್ ಅಹ್ಮದ್, ಡಾ ಫಕ್ರುದ್ದೀನ್ ಆಲಿ, ಡಾ. ಮೊಹಮ್ಮದ್ ಫೈಝ್, ಡಾ. ರಾಜೇಶ್ ಲೋಬೋ ಮತ್ತು ದರ್ಗಾ ಪದಾಧಿಕಾರಿಗಳಾದ ಹಾಜಿ ಇಬ್ರಾಹಿಂ ಕಕ್ಕೆತೋಟ, ಬಾವ ಹಾಜಿ, ಯು.ಟಿ ಇಲ್ಯಾಸ್ ಹಾಜಿ ತೋಟ, ಯು.ಕೆ.ಇಲ್ಯಾಸ್, ಯು.ಎಚ್.ಮೊಯಿದಿನ್, ಅಲಿಮೋನು ಮತ್ತು ವಿ.ಸಿ.ಖಾಸಿಂ ಕೋಡಿ, ಖಲೀಲ್ ಖಿಲ್ರಿಯಾ ನಗರ, ಅಹ್ಮದ್ ಬಾವ ಕೊಟ್ಟಾರ, ಇಸ್ಮಾಯಿಲ್, ಹಸನಬ್ಬ ಕಡಪರ, ಸಯ್ಯದ್ ಇಬ್ರಾಹಿಂ ತಂಙಳ್ ಮೊದಲಾದವರು ಉಪಸ್ಥಿತರಿದ್ದರು.
Next Story