ಪೇಜಾವರ ಶ್ರೀ ನಿಧನ : ಕೃತಿ ಬಿಡುಗಡೆ ಮುಂದೂಡಿಕೆ
ಮೂಡಬಿದಿರೆ, ಡಿ. 29: ಪೇಜಾವರ ಸ್ವಾಮೀಜಿ ನಿಧನದ ಕುರಿತಾದ ಶೋಕಾಚರಣೆ ನಿಮಿತ್ತ ಡಿ. 30ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ ಪ್ರೆಸ್ಕ್ಲಬ್ ಮತ್ತು ಸಮಾಜಮಂದಿರದ ಆಶ್ರಯದಲ್ಲಿ ನಡೆಯಲಿದ್ದ ಅನಿತಾ ಪಿ. ತಾಕೊಡೆ ವಿರಚಿತ `ಮೋಹನ ತರಂಗ' ರಂಗಕರ್ಮಿ ಮೋಹನ್ ಮಾರ್ನಾಡ್ ರಂಗಜೀವನ ಕಥನ ಕೃತಿ ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ವೇಣುಗೋಪಾಲ ಮತ್ತು ನಿರ್ವಾಹಕ ಧನಂಜಯ ಮೂಡುಬಿದಿರೆ ಇವರ ಜಂಟಿ ಪ್ರಕಟನೆ ತಿಳಿಸಿದೆ.
Next Story