ಮೂಡುಬಿದಿರೆ: ಬಾವಿಗೆ ಬಿದ್ದು ವಿವಾಹಿತ ಮೃತ್ಯು
ಮೂಡುಬಿದಿರೆ: ನೀರು ತರಲು ಹೋದ ವಿವಾಹಿತರೊಬ್ಬರು ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಕಲ್ಲಬೆಟ್ಟು ಗ್ರಾಮದ ಬರಂಗಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಹೇಮಂತ್ ಕೋಟ್ಯಾನ್ (49) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಇವರು ನೀರು ತರಲೆಂದು ಕೊಡಪಾನ ಹಿಡಿದುಕೊಂಡು ತಮ್ಮ ಮನೆಯ ಬಾವಿ ಬಳಿ ಹೋಗಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story