ಹೊಳೆಗೆ ಬಿದ್ದು ಮೃತ್ಯು
ಅಮಾಸೆಬೈಲು, ಜ.9: ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ಎಂಬಲ್ಲಿ ವ್ಯಕ್ತಿ ಯೊಬ್ಬರು ವರಾಹಿ ನದಿಯ ನೀರಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಚ್ಚಟ್ಟು ಗ್ರಾಮದ ಮೈಕಳ ನಿವಾಸಿ ಕೋಟಿ ಪೂಜಾರಿ (50) ಎಂದು ಗುರುತಿಸಲಾಗಿದೆ. ಇವರು ಜ.5ರಂದು ಸಂಜೆ ವೇಳೆ ಸ್ನಾನ ಮಾಡಲು ಹೊಳೆಯ ನೀರಿಗೆ ಇಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಇವರ ಮೃತದೇಹ ಜ.8ರಂದು ಬೆಳಗ್ಗೆ 11ಗಂಟೆಗೆ ಮಚ್ಚಟ್ಟು ಗ್ರಾಮದ ಬಟ್ಲಗುಂಡಿ ಎಂಬಲ್ಲಿರುವ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story