ಬಿಜೂರು, ಬವಲಾಡಿ ಕಟ್ಟಡ ಕಾರ್ಮಿಕರ ಸಮಾವೇಶ ಉದ್ಘಾಟನೆ
ಬೈಂದೂರು, ಜ.12: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬಿಜೂರು, ಬವಲಾಡಿ ಪ್ರದೇಶದ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಜ.11ರಂದು ಬವಲಾಡಿಯ ಮಕ್ಕಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಮಾವೇಶವನ್ನು ಉದ್ಘಾಟಿಸಿದ ಸಿಐಟಿಯು ಕಾರ್ಮಿಕ ಸಂಘದ ಬೈಂದೂರು ತಾಲೂಕು ಮುಖಂಡ ವೆಂಕಟೆಶ ಕೋಣಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ 1926ರಿಂದ ಕಾರ್ಮಿಕ ಸಂಘಗಳ ಸಂಘಟಿತ ಹೋರಾಟದಿಂದ ರಚನೆಗೊಂಡ ಕಾರ್ಮಿಕ ಕಾಯಿದೆ, ಕಾನೂನಿಂದಾಗಿ ವಿವಿಧ ಸೌಲಭ್ಯವನ್ನು ನಿರಂತರವಾಗಿ ಪಡೆಯುತ್ತಾ ಬಂದಿರುವ ಕಾರ್ಮಿಕರ ಹಕ್ಕನ್ನು ಇದೀಗ ಒಂದೊಂದಾಗಿ ಕಸಿದು ಕೊಳ್ಳಲಾಗುತ್ತಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಲು ಸಂಘಟಿತ ಹೊರಾಟಕ್ಕೆ ಕಾರ್ಮಿಕ ವರ್ಗ ಮುಂದಾಗಬೇಕು ಎಂದು ಹೇಳಿದರು.
ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸುರಕ್ಷತೆ, ಸಾಮಾಜಿಕ ಭದ್ರತೆಗಾಗಿ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ದೊರಕುವ ವಿವಿಧ ಸೌಲಭ್ಯ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನದ ಕುರಿತು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕಾರ್ಮಿಕ ಮುಖಂಡ ಗಣೇಶ್ ಆಚಾರ್ ಹೆರಂಜಾಲ್ ವಹಿಸಿದ್ದರು. ಸಿಐಟಿಯು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ಆಚಾರ್ ಹೆರಂಜಾಲ್ ವಂದಿಸಿದರು.
ಈ ಸಂದರ್ಭದಲ್ಲಿ ಬಿಜೂರು, ಬವಲಾಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾ ಯಿತು. ಅಧ್ಯಕ್ಷರಾಗಿ ನಾಗರಾಜ ದೇವಾಡಿಗ ಬವಲಾಡಿ, ಉಪಾಧ್ಯಕ್ಷರಾಗಿ ಶಂಕರ ಆಚಾರ್ ಬವಲಾಡಿ, ಸುಬ್ರಹ್ಮಣ್ಯ ಆಚಾರ್ ಬವಲಾಡಿ, ಕಾರ್ಯ ದರ್ಶಿಯಾಗಿ ಸುಬ್ರಹ್ಮಣ್ಯ ಆಚಾರ್ ಹೆರಂಜಾಲ್, ಜತೆ ಕಾರ್ಯದರ್ಶಿ ಯಾಗಿ ನಾಗೇಂದ್ರ ಆಚಾರ್ ಹೆರಂಜಾಲ್, ಸಂತೋಷ ಆಚಾರ್ ಬವಲಾಡಿ, ಕೋಶಾಧಿಕಾರಿ ಗಣೇಶ ಆಚಾರ್ ಹೆರಂಜಾಲ್ ಅವರನ್ನು ಆಯ್ಕೆ ಮಾಡಲಾಯಿತು.