ಉಳ್ಳಾಲ ಮಾರ್ಗತಲೆಯಲ್ಲಿ ಪ್ರತಿಭಟನೆ
ಮಂಗಳೂರು, ಜ.17: ಉಳ್ಳಾಲ ಮಾರ್ಗತಲೆ ಅಲ್ ಮಿಹ್ರಾಜ್ ಜುಮಾ ಮಸೀದಿ ಆಡಳಿತ ಮಂಡಳಿ ಮತ್ತು ಮಾರ್ಗತಲೆ ನಾಗರಿಕ ರಿಂದ ಎನ್ಆರ್ಸಿ, ಸಿಎಎ, ಎನ್ಪಿಆರ್ ಎಂಬ ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ದ ಪ್ರತಿಭಟನೆಯು ಶುಕ್ರವಾರ ನಮಾಝಿನ ಬಳಿಕ ಮಸೀದಿ ವಠಾರದಲ್ಲಿ ನಡೆಯಿತು.
ಮಸೀದಿಯ ಖತೀಬ್ ಉಸ್ಮಾನ್ ಸಖಾಫಿ ಮುಖ್ಯ ಭಾಷಣಗೈದರು. ಉಳ್ಳಾಲ ನಗರಸಭಾ ಸದಸ್ಯರಾದ ಯು.ಪಿ. ಅಯ್ಯೂಬ್ ಮಂಚಿಲ, ಅಸ್ಗರ್ ಆಲಿ, ಮಸೀದಿಯ ಅಧ್ಯಕ್ಷ ಹಾಜಿ ಆಲಿಯಬ್ಬ, ಕಾರ್ಯದರ್ಶಿ ಆಶೀಫ್, ಕೋಶಾಧಿಕಾರಿ ಮುಹಮ್ಮದ್, ಸಲಾತ್ ಕಮಿಟಿಯ ಅಬ್ಬಾಸ್ ಹಾಜಿ, ಹನೀಫ್ ಹಾಜಿ, ಖಾದರ್ ಹಾಜಿ ಉಪಸ್ಥಿತರಿದ್ದರು.
Next Story