ಎನ್ಆರ್ಸಿ, ಸಿಎಎ ವಿರುದ್ಧ ಜ.19ರಂದು ಕಾರ್ನಾಡಿನಲ್ಲಿ ಪ್ರತಿಭಟನೆ
ಮುಲ್ಕಿ, ಜ.18: ಸಂವಿದಾನ ಸಂರಕ್ಷಣಾ ಹೋರಾಟ ವೇದಿಕೆ ಮುಲ್ಕಿ ವಲಯದ ವತಿಯಿಂದ ಕೇಂದ್ರ ಸರಕಾರದ ಕರಾಳ ಕಾನೂನುಗಳಾದ ಎನ್ಆರ್ಸಿ, ಎನ್ಪಿಆರ್, ಸಿಎಎ ವಿರುದ್ಧ ಕಾರ್ನಾಡು ಗಾಂಧಿ ಮೈದಾನದ ಸ್ವಾತಂತ್ರ ಸಮರ ಸೇನಾನಿ ಕಾರ್ನಾಡು ಸದಾಶಿವ ರಾವ್ ವೇದಿಕೆಯಲ್ಲಿ ಜ.19ರಂದು ಪ್ರತಿಭಟನೆ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ವಲಯ ಸಂವಿಧಾನ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಎಂ.ಕೆ.ಅಬ್ದುಲ್ ಖಾದರ್ ಬಾವ ವಹಿಸಲಿರುವರು, ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್, ಹಾಗೂ ಕರ್ನಾಟಕ ದಾರಿಮಿೀಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಬಿ.ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಪ್ರಮುಖ ಭಾಷಣಕಾರರಾಗಿ ಮೈಸೂರಿನ ಉರಿಲಿಂಗ ಪೆದ್ದಿಮಠದ ಮಠಾದೀಶ ಜ್ಞಾನಪ್ರಕಾಶ್ ಸ್ವಾಮೀಜಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಶಾಫಿ ಬೆಳ್ಳಾರೆ, ಡಾ.ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ, ಅಹ್ಮದ್ ನಈಮ್ ಫೈಝಿ ಮುಕ್ವೆ ಮತ್ತಿತರರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story