ಹಿರಿಯಡಕ: ಫಿಟ್ ಇಂಡಿಯಾ ಸೈಕಲ್ ಜಾಥಾ
ಉಡುಪಿ, ಜ.20: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಇತ್ತೀಚೆಗೆ ಫಿಟ್ ಇಂಡಿಯಾ ಕಾರ್ಯಕ್ರಮದ ಪ್ರಯುಕ್ತ ಸೈಕಲ್ ಜಾಥಾ ನಡೆಯಿತು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಸೈಕಲ್ ಬಳಕೆಯ ಪ್ರಯೋಜನಗಳನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಸದೃಢ ಭಾರತಕ್ಕಾಗಿ ಸೈಕಲ್ನ್ನು ಬಳಸುಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಉಮೇಶ ಶೆಟ್ಟಿ ಸೈಕಲ್ ಸವಾರಿ ನಡೆಸಿ ಜಾಥಾಕ್ಕೆ ಚಾಲನೆ ನೀಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮತ್ತು ಹಿರಿಯಡಕದ ಬಂಟರ ಸಂಘದ ಉಪಾಧ್ಯಕ್ಷ ನಿತೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಿರಿಯಡಕ ಠಾಣಾಧಿಕಾರಿ ಸುಧಾಕರ ತಾಮಸೆ ಮತ್ತು ಠಾಣಾ ಸಿಬ್ಬಂದಿ ಗಳು ಸೈಕಲ್ ಜಾಥಾಗೆ ಸಹಕರಿಸಿದರು.
Next Story