ಉಡುಪಿ: ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ
ಉಡುಪಿ, ಜ.21: ಉಡುಪಿಯ ಎಸ್ಡಿಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಭಾವ ಪ್ರಕಾಶ ಸಭಾಂಗಣದಲ್ಲಿ ಜರಗಿತು.
ಸಂಘವನ್ನು ಉದ್ಘಾಟಿಸಿದ ರೋಟರಿ ಕ್ಲಬ್ ನಿಕಟಪೂರ್ವ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿ, ಯಾವುದೇ ಯಶಸ್ಸಿನ ಹಿಂದೆ ಸಮರ್ಥ ನಾಯಕತ್ವದ ಹಿನ್ನೆಲೆ ಅತ್ಯವಶ್ಯಕ. ಒಳ್ಳೆಯ ನಾಯಕನ ಮಾರ್ಗದರ್ಶನದಲ್ಲಿ ಧನಾತ್ಮಕ ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಮುಖಾಂತರ ಗುರಿಯನು್ನ ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ವಹಿಸಿದ್ದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಸುಚೇತ ಕುಮಾರಿ ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿ ಡಾ.ವೀರಕುಮಾರ ಕೆ., ರೋಟರಿ ಕ್ಲಬ್ ಅಧ್ಯಕ್ಷ ರಾಜವರ್ಮ ಅರಿಗ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ವಿವಿಧ ಚಟುವಟಿಕೆಗಳ ಕಾರ್ಯದರ್ಶಿಗಳಾದ ಸುಹಾಸ್ ಬಿ.ಜಿ., ಸಾಯಿ ಶ್ರುತಿ ಕೆ., ಡಾ.ಅನುಷ, ಸಿದ್ದಾರ್ಥ್ ಕೆ.ಪಾಟೀಲ್, ಎಂ.ವೈಷ್ಣವಿ, ಡಾ. ಕೊಚುಥೆರೇಸಿಯಾ ಜೋಸ್, ಮೋಹನ್ ಕುಮಾರ್ ಎನ್.ಟಿ., ಡಾ. ಅತ್ರೇಯ ಶರ್ಮ, ಎನ್.ನಂದಿನಿ, ಡಾ.ಮಹೇಶ್ ಶರ್ಮ, ಡಾ.ಛಾಯ ಹೊಸಮನಿ, ಡಾ.ಶಿವಕುಮಾರ್ ಎಸ್.ಟಿ., ಡಾ.ಸದಾನಂದ ಭಟ್, ಡಾ. ಪಂಚಮಿ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಪಿ. ಸ್ವಾಗತಿಸಿದರು. ಕಾರ್ಯದರ್ಶಿ ಜನನಿ ಡಿ.ರಾವ್ ವಂದಿಸಿ, ಶುಭ ಎಸ್.ಭಟ್ ಕಾರ್ಯಕ್ರಮ ನಿರೂಪಿಸಿದರು