ಬ್ಯಾರೀಸ್ ಗ್ರೀನ್ ಅಮೆನ್ಯೂನಲ್ಲಿ ಗಣರಾಜ್ಯೋತ್ಸವ ಆಚರಣೆ
ಕುಂದಾಪುರ, ಜ.26: ಕೋಟೇಶ್ವರ ಬ್ಯಾರೀಸ್ ಗ್ರೀನ್ ಅಮೆನ್ಯೂನಲ್ಲಿ 71ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಉದ್ಯಮಿ ಕೆ.ಮೊಹಮ್ಮದ್ ಮೈಲಾರ್ ಧ್ವಜಾರೋಹಣ ನೆರವೇರಿಸಿದರು. ಬ್ಯಾರೀಸ್ ಇನ್ಫ್ರಾಸ್ಟಕ್ಚರ್ ಆ್ಯಂಡ್ ಕನ್ಸ್ಟ್ರಕ್ಷನ್ ಇಂಜಿನಿಯರಿಂಗ್ನ ಮೊಹಮ್ಮದ್ ಆಶ್ರಫ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್, ಸುಲ್ತಾನೀಯ ಮಸೀದಿಯ ಅಧ್ಯಕ್ಷ ಆಸೀಫ್, ಧರ್ಮಗುರು ಉಮ್ಮರ್ ಮೌಲ್ವಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ್ ಶೆಟ್ಟಿ, ಸ್ಥಳೀಯರಾದ ರಂಗನಾಥ್ ಭಟ್, ವೈದ್ಯ ಡಾ.ಎಸ್.ಪಿ.ಆಚಾರ್ಯ ಮೊದ ಲಾದವರು ಉಪಸ್ಥಿತರಿದ್ದರು.
ಸಂತೋಷ್ ಮಾಸ್ಟರ್ ಸ್ವಾಗತಿಸಿ, ವಂದಿಸಿದರು. ಸಮುಚ್ಛಯದ ಉಸ್ತುವಾರಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
Next Story