ಬಂಟ್ವಾಳ : ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿಯಿಂದ ಜನ ಜಾಗೃತಿ ಸಭೆ
ವಿಟ್ಲ : ಬಂಟ್ವಾಳ ತಾಲೂಕು ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಜನ ಜಾಗೃತಿ ಸಭೆಯು ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂ ನಲ್ಲಿ ರವಿವಾರ ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ ಎನ್.ಪಿ.ಆರ್, ಎನ್.ಆರ್.ಐ.ಸಿ, ಮತ್ತು ಸಿ.ಎ.ಎ. ಎಂಬ ಹತ್ತು ನಿಗೂಢ ಅಕ್ಷರಗಳು ಭಾರತವನ್ನು ಕಳವಳಕ್ಕೆ ಕೆಡವಿದ್ದು ರಾಷ್ಟ್ರದಾದ್ಯಂತ ಇದರ ವಿರುದ್ಧದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಸರಕಾರ ಇದನ್ನು ಹಿಂತೆಗೆಯುವ ತನಕ ಹೋರಾಟ ಅನಿವಾರ್ಯ. ಅಧಿಕಾರಶಾಹಿ ವರ್ಗವು ಸರಳವಾದ ಕೆಲಸವನ್ನು ಸಂಕೀರ್ಣ ಗೊಳಿಸುವುದರ ಮೂಲಕ ಭ್ರಷ್ಟಾಚಾರ ಹಾಗೂ ಶೋಷಣೆಗೆ ಪ್ರೇರಣೆ ನೀಡುತ್ತದೆ ಎಂದರು.
ಹುಸೈನ್ ಬಾಅಲವಿ ತಂಙಲ್ ಕುಕ್ಕಾಜೆ ದುಆ ನೆರವೇರಿಸಿದರು. ಬಂಟ್ವಾಳ ತಾಲೂಕು ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್. ಮುಹಮ್ಮದ್ ಶಫಿ ಅಧ್ಯಕ್ಷತೆ ವಹಿಸಿದ್ದರು. ಪಿ.ಎ.ರಹೀಂ ಸ್ವಾಗತಿಸಿ, ಕೆ.ಎಚ್.ಅಬೂಬಕರ್ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Next Story