ಅಡೆಕ್ಕಲ್ : ಪೆ.7ಕ್ಕೆ ಸಮಸ್ತ ನೇತಾರರ ಅನುಸ್ಮರಣೆ, ಸನ್ಮಾನ ಕಾರ್ಯಕ್ರಮ
ವಿಟ್ಲ : ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ - ಅಡೆಕ್ಕಲ್ ಮಸ್ಜಿದುಲ್ ಬದ್ರಿಯ ಇದರ ಆಶ್ರಯದಲ್ಲಿ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಪೆ. 7 ರಂದು ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ.
ಅನುಸ್ಮರಣಾ ಸ್ವಾಗತ ಸಮಿತಿ ಚೆಯರ್ ಮೇನ್ ಜಿ. ಅಶ್ರಫ್ ಅದ್ಯಕ್ಷತೆ ವಹಿಸಿದ್ದು ಸಯ್ಯದ್ ಮುಹಮ್ಮದ್ ಶಮೀಂ ತಂಙಲ್ ಕುಂಬೋಳ್ ದು:ಹಾ ನೆರವೇರಿಸುವರು.
ಸಯ್ಯದ್ ಅಕ್ರಂ ಅಲಿ ತಂಙಲ್ ಕರಾವಳಿ ಶಂಸುಲ್ ಉಲಮಾ ಮೌಲೀದ್ ನ ನೇತ್ರತ್ವ ವಹಿಸಿದ್ದು ಅಂತರಾಷ್ಟ್ರೀಯ ವಾಗ್ಮಿ ಸ್ವಾಲಿಹ್ ಬತ್ತೇರಿ ಮುಖ್ಯ ಬಾಷಣಗೈಯುವರು. ಇದೇ ವೇಳೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರನ್ನು ಸನ್ಮಾನಿಸಲಾಗುವುದು.
ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ, ಸಯ್ಯದ್ ಅನಸ್ ತಂಙಳ್ ಗಂಡಿಬಾಗಿಲು, ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಆಲೂರು, ಸಯ್ಯದ್ ಇಸ್ಮಾಯಿಲ್ ತಂಙಲ್ಳ್ ಉಪ್ಪಿನಂಗಡಿ, ಮುಲ್ಕಿ ಶಾಫಿ ಮಸ್ಜಿದ್ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story