ಸುಂದರ ಕಪ್ಪೆಟ್ಟುವಿಗೆ ದೇವಾಡಿಗರ ಆಪತ್ ಭಾಂದವ ಪ್ರಶಸ್ತಿ
ಮಲ್ಪೆ, ಫೆ.9: ಮುಂಬೈಯ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ವತಿಯಿಂದ ಹಿರಿಯ ದಲಿತ ಹೋರಾಟಗಾರ, ಸಮಾಜ ಸೇವಕ ಸುಂದರ್ ಕಪ್ಪೆಟ್ಟು ಮತ್ತು ಅವರ ಪತ್ನಿ ಜಯಶ್ರೀ ಅವರಿಗೆ ‘ದೇವಾಡಿಗರ ಆಪತ್ ಭಾಂದವ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲಾಯಿತು
ಕಳೆದ ಮೂರು ದಶಕಗಳ ಕಾಲ ದಲಿತರ ಹಿಂದುಳಿದವರ ನೋವಿಗೆ ಧ್ವನಿ ಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕವಾ ಅಪಾರ ಸೇವೆ ಸಲ್ಲಿಸಿದ ಹಿರಿಯ ದಲಿತ ಹೋರಾಟಗಾರರಾದ ಸುಂದರ್ ಕಪ್ಪೆಟ್ಟು, ದೇವಾಡಿಗ ಸಮಾಜದ ಬಡವರಿಗೆ ವೈದ್ಯಕೀಯ ನೆರವು ನೀಡುತ್ತಿರುವ ಸೇವೆಗಾಗಿ ಈ ಗೌರವವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ದೇವಾಡಿಗ ಅಕ್ಷಯ ಸೇವಾ ಫೌಂಡೇಶನ್ನ ಸದಾಶಿವ ಮೊಯ್ಲಿ, ಭೋಜ ದೇವಾಡಿಗ, ಶ್ರೀಕರ ದೇವಾಡಿಗ, ದಿನೇಶ್ ದೇವಾಡಿಗ, ರಾಘವೇಂದ್ರ, ರಾಜ ದೇವಾಡಿಗ, ಗಿರೀಶ್ ದೇವಾಡಿಗ, ಸತೀಶ್ ದೇವಾಡಿಗ, ಅಭಿಷೇಕ್ ದೇವಾಡಿದ, ದಯಾನಂದ ದೇವಾಡಿಗ, ಗಣೇಶ ಶೇರಿಗಾರ ಮೊದ ಲಾದವರು ಉಪಸ್ಥತರಿದ್ದರು
Next Story