ಸವಿತಾ ಸುವರ್ಣರಿಗೆ ಡಾಕ್ಟರೇಟ್
ಮಂಗಳೂರು, ಫೆ.19: ಮೂಡುಬಿದಿರೆಯ ಆಳ್ವಾಸ್ ಕಾಲೇಜ್ನ ಸ್ನಾತಕೋತ್ತರ ಸಮಾಜಶಾಸ್ತ್ರದ ಪ್ರಾಧ್ಯಾಪಕಿ, ಬಜಾಲ್ ನಿವಾಸಿ ಸವಿತಾ ಸುವರ್ಣ ಅವರಿಗೆ ತಮಿಳುನಾಡಿನ ಕೊಯಮುತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಅನ್ಕೋಲಜಿಯ ಸಮಾಜ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ.ಜಾನೆಟ್ ಪರಮೇಶ್ವರ್ರ ಮಾರ್ಗದರ್ಶನದಲ್ಲಿ ‘ಎ ಸ್ಟಡಿ ಆನ್ ಕೋಪಿಂಗ್ ಪ್ಯಾಟರ್ನ್ ಆಫ್ ದಿ ಕೇರ್ಗಿವರ್ಸ್ ಆಫ್ ಸ್ಕೈಜೋಫ್ರೆನಿಕ್ ಪೇಶೆಂಟ್ಸ್ ಕೊರೆಲೇಟೆಡ್ ವಿತ್ ಪರ್ಸನಾಲಿಟಿ ಟೈಪ್ ಆ್ಯಂಡ್ ಸೀವಿಯಾರಿಟಿ ಆಫ್ ದಿ ಇಲ್ನೆಸ್’ ಎಂಬ ವಿಷಯಕ್ಕೆ ಈ ಗೌರವ ಲಭಿಸಿದೆ.
Next Story