‘ವೀರನಾರಿ ಅಬ್ಬಕ್ಕ’ ಪ್ರಶಸ್ತಿ ಪ್ರಕಟ, ಉತ್ಸವದ ಪೋಸ್ಟರ್ ಬಿಡುಗಡೆ
ಮಂಗಳೂರು, ಫೆ.23: ಪ್ರಸಕ್ತ ಸಾಲಿನ ‘ವೀರನಾರಿ ಅಬ್ಬಕ್ಕ ಪ್ರಶಸ್ತಿ’ ಘೋಷಣೆಯಾಗಿದ್ದು, ಹಿರಿಯ ಸಾಹಿತಿ ಉಷಾ ಪಿ. ರೈ ಹಾಗೂ ರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯಾದರ್ಶಿನಿ ಆಯ್ಕೆಯಾಗಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ ವಿವರಗಳನ್ನು ಘೋಷಿಸಿದರು.
ಫೆ.29 ಮತ್ತು ಮಾರ್ಚ್ 1ರಂದು ಅಸೈಗೋಳಿಯಲ್ಲಿ ನಡೆಯಲಿರುವ ಅಬ್ಬಕ್ಕ ಉತ್ಸವ-2020ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದೆ.
ಇದೇ ಸಂದರ್ಭ ಅಬ್ಬಕ್ಕ ಉತ್ಸವದ ಪೋಸ್ಟರ್ ಅನ್ನು ಸಚಿವರು ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ .ಜೆ .ರೂಪಾ ಉಪಸ್ಥಿತರಿದ್ದರು.
Next Story