ತಮಿಳ್ನಾಡಿನ ಮೀನುಗಾರ ಮಂಗಳೂರಿನಲ್ಲಿ ನಾಪತ್ತೆ
ಮಂಗಳೂರು, ಫೆ.24: ಮೂಲತಃ ತಮಿಳ್ನಾಡಿನ ಮೀನುಗಾರನೊಬ್ಬ ಮಂಗಳೂರಿನಲ್ಲಿ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳ್ನಾಡಿನ ರಾಮನಾಥಪುರಂ ಜಿಲ್ಲೆಯ ಅಲಂಗನ ಕುಳಂ ನಿವಾಸಿ ನಾಗಮುತ್ತು (54) ನಾಪತ್ತೆಯಾದವರು. ಕಳೆದ 10 ವರ್ಷದಿಂದ ಮಂಗಳೂರಿನಲ್ಲಿ ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಆರು ತಿಂಗಳ ಹಿಂದೆ ಊರಿಗೆ ಹೋಗಿದ್ದ ಇವರು ಮರಳಿ ಬಂದಿಲ್ಲ ಎನ್ನಲಾಗಿದೆ. ಹಾಗಾಗಿ ಬೇರೆ ಬೇರೆ ಕಡೆ ಹುಡುಕಿದರೂ ಪ್ರಯೋಜನವಾಗಿಲ್ಲ.
5 ಅಡಿ ಎತ್ತರದ ಸಪೂರ ಶರೀರದ, ಕಪ್ಪು ಮೈಬಣ್ಣ ಹೊಂದಿದ ಇವರು 8ನೆ ತರಗತಿ ಕಲಿತಿದ್ದು, ತಮಿಳು ಭಾಷೆ ಮಾತನಾಡು ತ್ತಾರೆ. ಇವರನ್ನು ಕಂಡಲ್ಲಿ ದೂ.ಸಂ: 0824-2220518ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story