ದೆಹಲಿ ಹಿಂಸಾಚಾರ: ಎಸ್ವೈಎಸ್ ದ.ಕ.ಜಿಲ್ಲಾ ಸಮಿತಿ ಖಂಡನೆ
ಮಂಗಳೂರು, ಫೆ.27: ದೆಹಲಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮುಸ್ಲಿಂ ಸಮುದಾಯವನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಹಿಂಸಾಚಾರಕ್ಕೆ ಎಸ್ವೈಎಸ್ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಎನ್ಎಸ್ ಉಮರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ವಿವಿಧತೆಯಲ್ಲಿ ಏಕತೆ ಸಾರಿದ ದೇಶದ ಸಂಸ್ಕೃತಿಯು ಇಂದು ವಿನಾಶಕ್ಕೆ ಹೋಗುತ್ತಿರುವುದು ಖೇದಕರವಾಗಿದೆ. ಇಂತಹ ನೀಚ, ಹೇಯ ಕೃತ್ಯವನ್ನು ಕೊನೆಗಾಣಿಸುವುದರ ಮೂಲಕ ಶಾಂತಿ ನೆಲೆಸಲು ಸರಕಾರ ಮುಂದಾಗಬೇಕಿದೆ ಎಂದು ಸಮಿತಿ ಒತ್ತಾಯಿಸಿದೆ.
Next Story