ಪುರ್ನವಸತಿ ಕೇಂದ್ರದ ನಿರಾಶ್ರಿತರಿಗೆ ಬಟ್ಟೆ ವಿತರಣೆ
ಉಡುಪಿ, ಮಾ.31: ಪರ್ಕಳ ಪಾಟೀಲ್ ಕ್ಲೋತ್ ಸ್ಟೋರ್ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಉಡುಪಿ ಬೋರ್ಡ್ ಹೈಸ್ಕೂಲ್ನಲ್ಲಿರುವ ಪುರ್ನವಸತಿ ಕೇಂದ್ರದ ನಿರಾಶ್ರಿತರಿಗೆ ಬಟ್ಟೆಯನ್ನು ಮಂಗಳವಾ ಉಚಿತವಾಗಿ ವಿತರಿಸಲಾಯಿತು.
ಸಾಮಾಜಿಕ ಅಂತರ, ಆರೋಗ್ಯ ಸುರಕ್ಷತೆ ಪಾಲನೆ ಮಾಡಿಕೊಂಡು ಬಟ್ಟೆಯನ್ನು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೊಳಿಕರ್ ವಿತರಿಸಿದರು. ಪಾಟೀಲ್ ಕ್ಲೋತ್ ಸ್ಟೋರ್ ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದ್ದರು. ಒಟ್ಟು 150 ಜನರಿಗೆ ಪಂಚೆ, ಟೀಶರ್ಟ್, ಶರ್ಟ್ಗಳನ್ನು ವಿತರಿಸಲಾಯಿತು. ಈ ಸಂದರ್ಭ ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಾಪು, ಚೇತನ್ ಪಡುಬಿದ್ರೆ ಮೊದಲಾದ ವರು ಉಪಸ್ಥಿತರಿದ್ದರು.
Next Story