ಶಿರ್ವ: ಮದ್ಯ ಸಿಗದೆ ಮತ್ತೊಬ್ಬ ಆತ್ಮಹತ್ಯೆ
ಶಿರ್ವ, ಮಾ.31: ಮದ್ಯ ಸಿಗದ ಕಾರಣಕ್ಕೆ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕುರ್ಕಾಲು ಗ್ರಾಮದ ಸುಭಾಸನಗರ ಎಂಬಲ್ಲಿ ಮಾ.30ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಸುಭಾಸ್ನಗರದ ನಾಯಕ್ ಕಂಪೌಂಡ್ ನಿವಾಸಿ ಪಾಂಡು ಪೂಜಾರಿ(68) ಎಂದು ಗುರುತಿಸಲಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದ ಇವರು, ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ದೊರೆಯದ ವೇದನೆ ಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story