ಅಕ್ರಮ ಕಸಾಯಿಖಾನೆಗೆ ದಾಳಿ: ಮೂವರ ಬಂಧನ
ಬೈಂದೂರು, ಎ.1: ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿ ಎ.1ರಂದು ಬೆಳಗಿನ ಜಾವ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಡಾಕೆರೆಯ ಎನ್.ಸಿ ಮನ್ಸೂರ್(38), ಕಿರಿಮಂಜೇಶ್ವರ ಮುಹಮ್ಮದ್ ಸುಲ್ತಾನ(27), ನಾವುಂದದ ಕುರ್ಷಿದ್ ಅಹಮ್ಮದ್(22) ಬಂಧಿತ ಆರೋಪಿಗಳು. ಉಳಿದಂತೆ ಮುಹಮ್ಮದ್ ಹರ್ಷದ್, ಮುಹಮ್ಮದ್ ಮಸೂದ್ ಹಾಗೂ ಇತರ ಇಬ್ಬರು ಸ್ಥಳದಿಂದ ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ 200 ಕೆಜಿ ಕೋಣದ ಮಾಂಸ, 2 ಕರುಗಳು, ಎರಡು ಕಾರು ಹಾಗೂ ಮೂರು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story