ಎಪಿಎಂಸಿಯಿಂದ ಎಲ್ಲ ವ್ಯವಸ್ಥೆ: ಕೃಷ್ಣರಾಜ್ ಹೆಗ್ಡೆ
ಬೈಕಂಪಾಡಿ ಎಪಿಎಂಸಿ ಯಾರ್ಡ್ಗೆ ಸೆಂಟ್ರಲ್ ಮಾರ್ಕೆಟ್ನ ಹಣ್ಣು-ತರಕಾರಿ ಸಗಟು ವ್ಯಾಪಾರಿಗಳ ಸ್ಥಳಾಂತರ
ಮಂಗಳೂರು, ಎ.2: ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿರುವ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರ ಮಾಡಿರುವುದನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೃಷ್ಣರಾಜ್ ಹೆಗ್ಡೆ ಸ್ವಾಗತಿಸಿದ್ದು, ಎಪಿಎಂಸಿಯಲ್ಲಿ ವ್ಯಾಪಾರಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಉಪಯೋಗ ಇಲ್ಲದೆ ಖಾಲಿಯಾಗಿರುವ ಎಪಿಎಂಸಿ ಪ್ರಾಂಗಣಕ್ಕೆ ಈಗ ಜೀವ ಬಂದಿದೆ. ಸಾಕಷ್ಟು ಸ್ಥಳಾವಕಾಶ ಎಪಿಎಂಸಿಯಲ್ಲಿದ್ದು, ಉತ್ತಮ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅಲ್ಲಿ ಅವಕಾಶವಿದೆ. ಜಿಲ್ಲಾಡಳಿತ ಈ ವ್ಯವಸ್ಥೆಯನ್ನು ಸೂಕ್ತ ತೀತಿಯಲ್ಲಿ ಬಳಿಸಿಕೊಳ್ಳುವಂತಾಗಲಿ ಎಂದು ಅವರು ಮನವಿ ಮಾಡಿದ್ದಾರೆ.
Next Story