ಪ್ರತ್ಯೇಕ ಪ್ರಕರಣ: ಕುಸಿದು ಬಿದ್ದು ಇಬ್ಬರು ಮೃತ್ಯು
ಮಣಿಪಾಲ, ಮೇ 13: ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಗೀತಾ(46) ಎಂಬವರು ಪ್ರಗತಿನಗರದಲ್ಲಿರುವ ತನ್ನ ಅಕ್ಕ ಮನೆಯಲ್ಲಿ ಮೇ 12ರಂದು ಸಂಜೆ ವೇಳೆ ಶೌಚಾಲಯಕ್ಕೆ ಹೋಗಿ ಹಿಂತಿರು ಗುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಶಿರ್ವ ಅಕ್ಷಯಾ ವುಡ್ವರ್ಕ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಆಚಾರ್ಯ(45) ಎಂಬವರು ಮೇ 12ರಂದು ಸಂಜೆ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story