ಹೈನುಗಾರಿಕೆಯ ಸಾಲದ ತೀರಿಸಲಾಗದೆ ಮಹಿಳೆ ಆತ್ಮಹತ್ಯೆ
ಶಂಕರನಾರಾಯಣ, ಮೇ 17: ಹೈನುಗಾರಿಕೆಗೆ ಮಾಡಿದ ಸಾಲವನ್ನು ತೀರಿಸಲಾಗದ ಚಿಂತೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಂಗವಳ್ಳಿ ಗ್ರಾಮದ ಮರೂರು ಚೆರ್ಕಾಡಿ ಎಂಬಲ್ಲಿ ಮೇ 16ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಮರೂರು ನಿವಾಸಿ ಪಾರ್ವತಿ ಬಾಯಿ(63) ಎಂದು ಗುರುತಿಸ ಲಾಗಿದೆ. ಇವರು ಹೈನುಗಾರಿಕೆ ಮಾಡಿರುವ ಸಾಲವನ್ನು ತೀರಿಸಲಾ ಗದ ವಿಚಾರ ವಾಗಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಪದಾರ್ಥ ವನ್ನು ಸೇವಿಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥ ಗೊಂಡ ಅವರು ಮೇ 17ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story