ಉಡುಪಿ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ರಚನೆ
ಉಡುಪಿ, ಮೇ 29: ಉಡುಪಿ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ (ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ) ಸಮಿತಿಯನ್ನು ರಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ರಘುಪತಿ ಭಟ್, ಸದಸ್ಯರುಗಳಾಗಿ ಸಾಮಾನ್ಯ- ರಾಜು ಪೂಜಾರಿ ಜಾತಬೆಟ್ಟು, ಮಹಿಳೆ- ರಜನಿ ಎ.ಶೆಟ್ಟಿ ಕಾಯಿನಾಡಿ, ಪರಿಶಿಷ್ಟ ಪಂಗಡ ಮಾಧವ ಕೊಟ್ಟಂಬೈಲು ಹಾಗೂ ಕಾರ್ಯ ದರ್ಶಿಯಾಗಿ ತಹಶೀಲ್ದಾರ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಮಿತಿ ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story