ದ್ವಿತೀಯ ಪಿಯು ಮೌಲ್ಯಮಾಪಕರಿಗೆ ಎಸ್. ಎಲ್.ಭೋಜೇಗೌಡರಿಂದ ಮಾಸ್ಕ್ ವಿತರಣೆ
ಮಂಗಳೂರು, ಮೇ 30: ಮಂಗಳೂರು ಜಿಲ್ಲಾ ಕೇಂದ್ರದ ದ್ವಿತೀಯ ಪಿಯುಸಿ ಮೌಲ್ಯಮಾಪನ ಕೇಂದ್ರದಲ್ಲಿ ಕರ್ತವ್ಯನಿರ್ವಹಿಸುವ ಎಲ್ಲಾ ಮೌಲ್ಯಮಾಪಕರಿಗೆ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ ವತಿಯಿಂದ ಮಾಸ್ಕ್ ಹಾಗೂ ಕೇಂದ್ರ ಕಚೇರಿಗೆ ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು.
ಯುವ ಜನತಾ ದಳ ಜಿಲಾಧ್ಯಕ್ಷ ಅಕ್ಷಿತ್ ಸುವರ್ಣ ಮೌಲ್ಯಮಾಪನ ಕೇಂದ್ರದಲ್ಲಿ ಕರ್ತವ್ಯನಿರ್ವಹಿಸುವ ಮೌಲ್ಯಮಾಪಕರಿಗೆ ಮಾಸ್ಕ್ ಹಾಗೂ ಕೇಂದ್ರ ಕಚೇರಿಗೆ ಸ್ಯಾನಿಟೈಸರ್ ವಿತರಿಸಿದರು.
ಈ ಸಂದರ್ಭ ದ.ಕ. ಪದವಿ ಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರ, ದ.ಕ. ಉಪನ್ಯಾಸಕರ ಸಂಘದ ಅಧ್ಯಕ್ಷ
ಸೋಮಶೇಖರ್ ನಾಯಕ್, ಜೆಡಿಎಸ್ ಮುಖಂಡರಾದ ರತೀಶ್ ಕರ್ಕೇರ, ಹಿತೇಶ್ ರೈ, ಮುಹಮ್ಮದ್ ಫೈಝಲ್ ಉಪಸ್ಥಿತರಿದ್ದರು.
Next Story