ನೇಣು ಬಿಗಿದು ಆತ್ಮಹತ್ಯೆ
ಬೈಂದೂರು, ಜೂ.11: ಹುಬ್ಬಳ್ಳಿಯಲ್ಲಿ ಹೊಟೇಲ್ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಜೂ.9ರಂದು ಮನೆಯಿಂದ ಹೋದ ಹರೀಶ್ ಪೂಜಾರಿ (31) ಎಂಬವರು ಮರುದಿನ ರಾತ್ರಿ ವೇಳೆ ಕಾಲ್ತೋಡು ಗ್ರಾಮದ ಕಟ್ಟೆ ಬೈರುಮನೆ ಎಂಬಲ್ಲಿನ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಇತ್ತೀಚೆಗೆ ಊರಿಗೆ ಬಂದು ಇಲ್ಲೇ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಅಲ್ಲಲ್ಲಿ ಕೆಲಸರಿಂದ ಕೈಸಾಲ ಪಡೆದಿದ್ದರೆಂದು ಹೇಳಲಾಗಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story