ಅಂದರ್ ಬಾಹರ್: 10 ಮಂದಿ ಬಂಧನ
ಬೈಂದೂರು, ಜೂ.25: ಉಪ್ಪುಂದ ಗ್ರಾಮದ ಶಾಲೆ ಬಾಗಿಲು ಅಂಚೆ ಕಚೇರಿ ಬಳಿ ಜೂ.24ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರೋಪದಲ್ಲಿ 10 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ರಘುರಾಮ ಶೆಟ್ಟಿ(44), ನಾಗರಾಜ ಖಾರ್ವಿ(24), ಪ್ರಶಾಂತ ಪೂಜಾರಿ (30), ಗೋಪಾಲ ಕೃಷ್ಣ ಖಾರ್ವಿ(21), ಕೃಷ್ಣ ಖಾರ್ವಿ(30), ನಾರಾಯಣ ಖಾರ್ವಿ(35), ಉದಯ ಖಾರ್ವಿ(38), ರಾಮ ಖಾರ್ವಿ(35), ನಾಗರಾಜ ಖಾರ್ವಿ(32), ಮಂಜುನಾಥ ಖಾರ್ವಿ(32) ಬಂಧಿತ ಆರೋಪಿಗಳು. ಇವರಿಂದ 15,710ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story