ಜೂ.29 ರಂದು ಉಳ್ಳಾಲ ದರ್ಗಾದಲ್ಲಿ ಕೋವಿಡ್-19 ಕುರಿತು ಸಮಾಲೋಚನಾ ಸಭೆ
ಉಳ್ಳಾಲ: ಇಲ್ಲಿನ ಸುತ್ತಮುತ್ತಲಿನ ಹರಡಿರುವ ಮಾರಕ ಕೊರೋನ ರೋಗವನ್ನು ಮಟ್ಟ ಹಾಕುವ ಮಾರ್ಗೋಪಾಯಗಳ ಕುರಿತು ಸಮಾಲೋಚನೆ ನಡೆಸಲು ಉಳ್ಳಾಲದ ಸರ್ವ ಧರ್ಮೀಯರ ಮುಖಂಡರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಭೆಯು ಜೂ.29 ರಂದು ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಸಭೆಯಲ್ಲಿ ಶಾಸಕ ಯುಟಿ.ಖಾದರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story