ಮಳೆಗೆ ಕುಸಿದಿದ್ದ ಮನೆ: ಮಿಥುನ್ ರೈ ಆರ್ಥಿಕ ನೆರವಿನೊಂದಿಗೆ ದುರಸ್ತಿ
ಮಂಗಳೂರು: ನಗರದ ಕಾರ್ ಸ್ಟ್ರೀಟ್ ಸದ್ಗುರು ಕಾಂಪ್ಲೆಕ್ಸ್ ಬಳಿಯ ಮಲ್ಯ ಕಂಪೌಂಡಿನ ಮಾಲತಿ ನಾಯಕ್ ಎಂಬವರ ಮನೆಯ ಭಾಗಶಃ ಭಾರೀ ಮಳೆಯಿಂದ ಕುಸಿದು ಬಿದ್ದಿದ್ದು, ಮನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಆರ್ಥಿಕ ನೆರವಿನೊಂದಿಗೆ ದುರಸ್ತಿ ಮಾಡಲಾಯಿತು.
ಮಳೆ ಕಾರಣ ಕುಸಿದು ಬಿದ್ದ ಮನೆಗೆ ಮಿಥುನ್ ರೈಯವರು ಭೇಟಿ ನೀಡಿ 5,000 ಸಾವಿರ ಧನ ಸಹಾಯ ನೀಡಿದಲ್ಲದೆ ಮನೆಯನ್ನು ದುರಸ್ತಿ ಮಾಡಿಕೊಡುವ ಭರವಸೆಯನ್ನು ನೀಡಿದ್ದರು, ಅದರಂತೆ ಅಲ್ತಾಫ್ ರವರ ತಂಡ ಮನೆಯನ್ನು ದುರಸ್ತಿ ಮಾಡಿದರು.
Next Story