ಕುಂತಳನಗರ ಕೂಡುರಸ್ತೆ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ
ಶಿರ್ವ, ಸೆ.9: ಕಾಪು ವಿಧಾನಸಬಾ ಕ್ಷೇತ್ರದ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಕುಂತಳನಗರದ ಭದ್ರಮ ಸಮೀಪ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಡಿ ಸುಮಾರು 6.45ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೇಲ್ಸೆತುವೆಗೆ ಮಂಗಳವಾರ ಸಂಸದೆ ಶೋಬಾ ಕರಂದ್ಲಾಜೆ ಹಾಗೂ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಶಿಲಾನ್ಯಾಸ ನೆರವೇರಿಸಿದರು.
ಈ ಪ್ರದೇಶದಿಂದ ಹಾದುಹೋಗುವ ರಸ್ತೆ ಅಭಿವೃದ್ಧಿಗೆ 4.5ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸೇತುವೆ ಕಾಮಗಾರಿ ಪೂರ್ಣಗೊಂಡ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂಸದೆ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಪಂ ಸದಸ್ಯರಾದ ಶಿಲ್ಪಾಜಿ.ಸುವರ್ಣ, ಗೀತಾಂಜಲಿ ಸುವರ್ಣ, ಮಾಜಿ ತಾಪಂ ಅಧ್ಯಕ್ಷ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ರಾಜೇಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷ ಕಕ್ರೆಮನೆ ಹರೀಶ್ ಶೆಟ್ಟಿ, ಸದಸ್ಯರುಗಳಾದ ಗುರುರಾಜ ಭಟ್, ಸುಧಾಕರ ಪೂಜಾರಿ, ದಿವಾಕರ ಸುವರ್ಣ, ಬೆಳ್ಳೆ ದೊಡ್ಡಮನೆ ಅಜಿತ್ ಶೆಟ್ಟಿ, ಅಭಿಯಂತರುಗಳಾದ ಕೃಷ್ಣಾನಂದ, ತ್ರಿನೇಶ್ವರ್, ಉಪಸ್ಥಿತರಿದ್ದರು.