ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್
ಬಂಟ್ವಾಳ: ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ಸೆ.11ರಂದು ಸಂಜೆ 4.30 ಕ್ಕೆ ಸೆಕ್ಟರ್ ಅಧ್ಯಕ್ಷ ಝುಬೈರ್ ಸಂಪಿಲರವರ ಅಧ್ಯಕ್ಷತೆಯಲ್ಲಿ ದಅವಾ ಕಾನ್ಫರೆನ್ಸ್ ಸುನ್ನೀ ಮಹಲ್ ಕೈಯ್ಯೂರು, ಮಂಚಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮೀ ಪ್ರಾರ್ಥನೆ ನಡೆಸಿದರು. ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ, ಉಳ್ಳಾಲ ತರಗತಿ ನಡೆಸಿದರು.
ಮುಖ್ಯ ಅತಿಥಿಗಳಾಗಿ ಶೈಖುನಾ ಎಣ್ಮೂರು ಉಸ್ತಾದ್, ಕರೀಂ ಕದ್ಕಾರ್, ಅಸ್ಲಂ ಸಂಪಿಲ, ಹಂಝ ಮಂಚಿ, ರಫೀಕ್ ಝುಹ್ರಿ ಮಂಚಿ, ಇಬ್ರಾಹಿಂ ಸುರಿಬೈಲು, ಹಾಗೂ ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಉಪಸ್ಥಿತರಿದ್ದರು.
ಲಾಕ್ ಡೌನ್ ಸಮಯದಲ್ಲಿ ಸೆಕ್ಟರ್ ಮಟ್ಟದಲ್ಲಿ ಹಮ್ಮಿಕೊಂಡ ಆನ್ಲೈನ್ ತರ್ತೀಲ್ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ಮಟ್ಟದ ಆನ್ ಲೈನ್ ಮ್ಯಾಗಝೀನ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಮಂಚಿ ಸೆಕ್ಟರ್ ಪ್ರತಿಭೆ ಅಹ್ಮದ್ ಫಸೀಹ್ ಮಂಚಿ ಯವರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಬಳಿಕ ಸೆಕ್ಟರ್ ದಅವಾ ವಿಂಗ್ ನೂತನ ಸಮಿತಿಯನ್ನು ರಚಿಸಲಾಯಿತು.
ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.