ಲಯನ್ಸ್ ವತಿಯಿಂದ ಸಾಧಕ ಶಿಕ್ಷಕಿಗೆ ಸನ್ಮಾನ
ಕಾಪು, ಸೆ.17: ಕಾಪು ದಂಡತೀರ್ಥ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವಾರಿಜ ಮಧುಸೂದನ್ ಅವರನ್ನು ಶಿಕ್ಷಕರ ದಿನಾ ಚರಣೆ ಅಂಗವಾಗಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317ಸಿಯ ಪ್ರಾಂತ್ಯ ವತಿಯಿಂದ ಅವರ ನಿವಾಸದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಪ್ರಾಂತ್ಯಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರ್ವಾಹಕ ಸಂಪುಟ ಕಾರ್ಯದರ್ಶಿ ರವಿರಾಜ ನಾಯಕ್ ಅಭಿ ನಂದನಾ ಭಾಷಣ ಮಾಡಿ, ಸನ್ಮಾನಪತ್ರವನ್ನು ವಾಚಿಸಿದರು. ಜಿಲ್ಲಾ ಮಾರ್ಗ ದರ್ಶಿ ಶ್ರೀಧರ ಶೇಣವ, ಪ್ರಾಂತ್ಯದ ಮಾರ್ಗದರ್ಶಿ ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಎಲ್.ಸಿ.ಎಫ್. ಮುಖ್ಯ ರಾಯಭಾರಿ ಗೋಪಾಲ ಬಂಗೇರ, ಪ್ರಾಂತ್ಯಾ ಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕೃಷ್ಣಪ್ಪ ಜತ್ತನ್ ಮಾತನಾಡಿದರು.
ವಿಜಯ ಜಿ. ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂತ್ಯದ ಕಾರ್ಯದರ್ಶಿ ಕಿರಣ್ ರಂಗಯ್ಯ ವಂದಿಸಿದರು. ಲಯನ್ಸ್ ಕ್ಲಬ್ ಮಲ್ಪೆ ಅಧ್ಯಕ್ಷ ಕುಶ ಬಂಗೇರ, ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.
Next Story