ಕೊಳಲಗಿರಿ ಪರಾರಿ ರಕ್ಷಿತಾರಣ್ಯದಲ್ಲಿ ಭೂಕುಸಿತ
ಉಡುಪಿ, ಸೆ.22: ಬ್ರಹ್ಮಾವರ ತಾಲೂಕು ಹಾವಂಜೆ ಮತ್ತು ಉಪ್ಪೂರು ಗ್ರಾಮಗಳೆರಡಕ್ಕೂ ಸಂಬಂಧಪಟ್ಟ ರಿಂಗ್ ರೋಡ್ ಪರಿಸರದಲ್ಲಿ ಭಾರಿ ಭೂಕುಸಿತ ಉಂಟಾಗಿರುವುದು ಕಂಡುಬಂದಿದೆ.
ಈ ಪ್ರದೇಶ ರಕ್ಷಿತಾರಣ್ಯದಿಂದ ಕೂಡಿದೆ. ಕಳೆದ ಕೆಲವು ದಿನಗಳ ಸತತ ಮಳೆಯಿಂದ ಈ ಭಾಗದ ಹಸಿರು ರಕ್ಷಿತಾರಣ್ಯದ ಎತ್ತರ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಪರಿಸರದ ಹೆಚ್ಚಿನ ಮರಗಳು ನೆಲಕ್ಕುರುಳಿವೆ. ಇದರ ಪಕ್ಕದಲ್ಲೇ ಮದಗವೊಂದು ಇರುವುದರಿಂದ ಅದರಲ್ಲಿ ನೀರು ತುಂಬಿ ತುಳುಕುತ್ತಿದೆ.
ಈ ಭೂಪ್ರದೇಶದ ಸುತ್ತಮುತ್ತ ಅನೇಕ ಮನೆಗಳಿವೆ. ಈ ಪ್ರದೇಶ ಇನ್ನಷ್ಟು ಕುಸಿತವಾಗುವ ಮತ್ತು ಹಾನಿಯಾಗುವ ಸಂಭವವೂ ಇದೆ. ಇದಕ್ಕೆ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡರೆ ಪರಿಸರವನ್ನು ಹಾಗೂ ಜೀವ ಹಾನಿಯನ್ನು ತಪ್ಪಿಸಲು ಸಾಧ್ಯ ಎಂದು ಪರಿಸರಪ್ರೇಮಿ ಕೊಳಲಗಿರಿಯ ಪೌಲ್ ಅಲ್ಮೇಡಾ ಹಾಗೂ ಕೀಳಂಜೆಯ ನಿವಾಸಿ ಜಯಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.
Next Story