ಅಂದರ್ ಬಾಹರ್: ಆರು ಮಂದಿ ಬಂಧನ
ಶಂಕರನಾರಾಯಣ, ಸೆ. 30: ಅಂಪಾರು ಪೇಟೆ ಸಮೀಪದ ಹಾಡಿಯಲ್ಲಿ ಸೆ.29ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಪೂಜಾರಿ(46) ಕೃಷ್ಣ ಶೆಟ್ಟಿ(22), ಭಾಸ್ಕರ ಪೂಜಾರಿ(28), ಕರುಣಾಕರ ಶೆಟ್ಟಿ(35), ರಾಜು ವಾಲ್ತೂರು(59), ಪ್ರಭಾ ಬಂಧಿತ ಆರೋಪಿ ಗಳು. ಬಂಧಿತರಿಂದ 5,680ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story