ಎನ್ಎಸ್ಯುಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೌರಭ್ ಬಲ್ಲಾಳ್ ಆಯ್ಕೆ
ರಾಷ್ಟ್ರೀಯ ಸಂಯೋಜಕರಾಗಿ ಕ್ರಿಸ್ಟನ್ ಅಲ್ಮೇಡಾ
ಸೌರಭ್ - ಕ್ರಿಸ್ಟನ್ ಅಲ್ಮೇಡಾ
ಉಡುಪಿ, ಅ.1: ಎನ್ಎಸ್ಯುಐ. ಉಡುಪಿ ಜಿಲ್ಲಾಧ್ಯಕ್ಷರಾಗಿ ಸೌರಭ್ ಬಲ್ಲಾಳ್ರವರನ್ನು ಎನ್ಎಸ್ಯುಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕರ್ನಾಟಕ ಹಾಗೂ ಗೋವಾ ಉಸ್ತುವಾರಿ ಎರಿಕ್ ಸ್ಟೀಫನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಶಿಫಾರಿಸಿನ ಮೇರೆಗೆ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.
ಅದೇ ರೀತಿ ಎನ್.ಎಸ್.ಯು.ಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಉಡುಪಿ ಜಿಲ್ಲಾ ಮಾಜಿ ಎಸ್ಎಸ್ಯುಐ ಅಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story