ಪುತ್ತೂರು: ತಾಲೂಕು ಕೆಡಿಪಿ ಸದಸ್ಯರಾಗಿ ಇಸ್ಮಾಯೀಲ್ ನೆಲ್ಯಾಡಿ ಆಯ್ಕೆ
ಪುತ್ತೂರು, ಸೆ.1: ಪುತ್ತೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ ನ್ಯಾಯವಾದಿ ಇಸ್ಮಾಯೀಲ್ ನೆಲ್ಯಾಡಿ ಅವರನ್ನು ಸರಕಾರ ನೇಮಕಗೊಳಿಸಿದೆ.
ಈ ಹಿಂದೆ ನಾಮನಿರ್ದೇಶನ ಸದಸ್ಯರಾಗಿದ್ದ ಸರ್ವೋತ್ತಮ ಗೌಡ ಅವರು ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಇಸ್ಮಾಯೀಲ್ ನೆಲ್ಯಾಡಿಯವರನ್ನು ನೇಮಕ ಮಾಡಲಾಗಿದೆ.
ವಕೀಲ ವೃತ್ತಿಯನ್ನು ನಡೆಸುತ್ತಿರುವ ಇಸ್ಮಾಯಿಲ್ ನೆಲ್ಯಾಡಿ ಅವರು ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ, ನೆಲ್ಯಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿ, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story