ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕುಂದಾಪುರ, ಸೆ.4: ವಿದ್ಯಾರ್ಥಿಗಳು ಪರೋಪಕಾರದ ಗುಣವನ್ನು ಬೆಳೆಸಿ ಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಮುಂಬೈ ಜೋನ್ ಡಿಸಿಲ್ವ ಫೌಂಡೇಶನ್ನ ಜಂಟಿ ಆಶ್ರಯದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಕಾಲೇಜಿನಲ್ಲಿ ರವಿವಾರ ಆಯೋಜಿಸಲಾದ ಕಳೆದ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಉಡುಪಿ ಧರ್ಮಪ್ರಾಂತದ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಇಂದು ಸಂತ ಪದವಿ ಗಳಿಸಿದ ಮದರ್ ತೆರೇಸಾ ತೋರಿಸಿಕೊಟ್ಟ ಸೇವಾ ಮನೋಭಾವವನ್ನು ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊ ಳ್ಳಲು ಯತ್ನಿಸಬೇಕು ಎಂದರು.
ಕಾರ್ಯಕ್ರಮವನ್ನು ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಗ ಮದ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಉದ್ಘಾಟಿಸಿದರು. ಧರ್ಮಪ್ರಾಂತ ವ್ಯಾಪ್ತಿಯಲ್ಲಿ ಅತ್ಯ ಧಿಕ ಅಂಕಗಳನ್ನು ಗಳಿಸಿರುವ 54 ವಿದ್ಯಾರ್ಥಿಗಳನ್ನು ಹಾಗೂ ಸಿಎ ಪರೀಕ್ಷೆ ಉತ್ತೀರ್ಣರಾದ ಶೈನಿ ಮಿನೇಜಸ್ ಪಾಂಬೂರು, ಎಂಡ್ರಿಯಾ ಪೇತ್ರಿ, ರೋಯ್ ಆಲನ್ ಮಥಾಯಸ್ ಪೆರ್ನಾಲ್, ಗ್ರಾಮಕರಣಿಕರಾಗಿ ಆಯ್ಕೆ ಯಾದ ಪವಿತ್ರಾ ಮಿನೇಜಸ್ ಹಾಗೂ ಎನ್ಸಿಸಿಯಲ್ಲಿ ಉತ್ತಮ ಸಾಧನೆ ಗೈದ ಜೊವಿಟಾ ಕೆರೊಲಿನ್ ಅಂದ್ರಾದೆಯ ವರನ್ನು ಗೌರವಿಸಲಾಯಿತು.
ಉಡುಪಿ ಧರ್ಮಪ್ರಾಂತದ ಐಸಿವೈಎಂ ಮಾಜಿ ಅಧ್ಯಕ್ಷ ಡೆರಿಕ್ ಮಸ್ಕರೇನ್ಹಸ್ ಉನ್ನತ ಶಿಕ್ಷಣ ಹಾಗೂ ನಾಗರಿಕ ಸೇವೆಗಳಿಗೆ ಸೇರ್ಪಡೆ ಕುರಿತು ಮಾಹಿತಿ ನೀಡಿದರು. ಕೆಥೊಲಿಕ್ ಸಭಾದ ಉಡುಪಿ ಪ್ರದೇಶ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು. ಜೋನ್ ಡಿಸಿಲ್ವ ಫೌಂಡೇಶನ್ ಅಧ್ಯಕ್ಷ ಜೋನ್ ಡಿಸಿಲ್ವ, ಗ್ಲಾಡಿಸ್ ಡಿಸಿಲ್ವ, ಧರ್ಮಪ್ರಾಂತದ ಕೆಥೊಲಿಕ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜ, ಕೆಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜ, ಕೆಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ, ಕುಂದಾಪುರ ವಲಯ ಅಧ್ಯಕ್ಷ ಫ್ಲೈವನ್ ಡಿಸೋಜ, ಕಾರ್ಯ ದರ್ಶಿ ಶೈಲಾ ಡಿ. ಆಲ್ಮೇಡಾ, ಕಾರ್ಯಕ್ರಮ ಸಂಚಾಲಕ ಆಲ್ವಿನ್ ಕ್ವಾಡ್ರಸ್, ಕುಂದಾಪುರ ಘಟಕಾಧ್ಯಕ್ಷ ವಿಲ್ಸನ್ ಡಿ. ಆಲ್ಮೇಡ, ಎಲ್ರೊಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು.
ವಲೇರಿಯನ್ ಫೆರ್ನಾಂಡಿಸ್ ಸ್ವಾಗತಿಸಿದರು. ಕೆಥೊಲಿಕ್ ಸಭಾದ ಕಾರ್ಯದರ್ಶಿ ಜಸಿಂತಾ ಕುಲಾಸೊ ವಂದಿಸಿದರು. ವಿಲ್ಸನ್ ಒಲಿವೇರಾ ಮತ್ತು ಅನಿತಾ ಡಾಯಸ್ ಕಾರ್ಯ ಕ್ರಮ ನಿರೂಪಿಸಿದರು.