5 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
ಮಂಗಳೂರು, ಸೆ.29: ಕರ್ನಾಟಕ ಸರಕಾರ ನೀಡುವ 2015-16ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ದ.ಕ. ಜಿಲ್ಲೆಯ 5 ಗ್ರಾಪಂಗಳು ಆಯ್ಕೆಯಾಗಿವೆ.
ಪ್ರತೀ ತಾಲೂಕಿನ ಒಂದು ಗ್ರಾಪಂ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಹೊಸಂಗಡಿ (ಬೆಳ್ತಂಗಡಿ), ಮಾಣಿ (ಬಂಟ್ವಾಳ), ಚೇಳಾರು (ಮಂಗಳೂರು), ಕೊಯ್ಲ (ಪುತ್ತೂರು) ಹಾಗೂ ಸುಬ್ರಹ್ಮಣ್ಯ (ಸುಳ್ಯ) ಗ್ರಾಪಂ ಪುರಸ್ಕಾರಕ್ಕೆ ಪಾತ್ರವಾಗಿವೆ.
ಅ.2ರ ಗಾಂಧಿ ಜಯಂತಿಯಂದು ಬೆಂಗಳೂರು ವಿಧಾನಸೌಧದಲ್ಲಿ ನಡೆ ಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story