ಹಿಂದೂ ಧರ್ಮಜಾಗೃತಿ ಸಭೆ
ಮಣಿಪಾಲ, ನ.20: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ವಕ್ತಾರ ಗುರುಪ್ರಸಾದ್ ಮಾತನಾಡಿ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವಶ್ಯವಿರುವ ಆಂದೋಲನ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ನಿಮ್ಮ ವಿಚಾರಗಳ, ಕೌಶಲ್ಯದ, ಸಮಯದ, ಧನದ ದಾನ ಮತ್ತು ಅವಶ್ಯಕವಾದರೆ ನಿಮ್ಮ ಪ್ರಾಣದ ದಾನ ವನ್ನೂ ಈ ಹಿಂದೂ ರಾಷ್ಟ್ರಕ್ಕಾಗಿ ನೀಡುವಂತೆ ಕರೆ ನೀಡಿದರು.
ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ದಿನೇಶ್ ಸಿ.ನಾಯ್ಕ ಸಭೆಯನ್ನು ಉದ್ಘಾಟಿಸಿದರು. ಸನಾತನ ಸಂಸ್ಥೆಯ ಲಕ್ಷ್ಮೀ ಪೈ, ರಣರಾಗಿಣಿಯ ಶ್ರೀಕಲಾಜೋಶಿ ಉಪಸ್ಥಿತರಿದ್ದರು. ಸಮಿತಿಯ ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Next Story