ಸಂಚಾರ ಮಾರ್ಗಗಳ ತಾತ್ಕಾಲಿಕ ಬದಲಾವಣೆ
ಉಡುಪಿ, ಡಿ.1: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿಕ್ಕಲಗೋಡು -ಪಡುಬಿದ್ರೆ ರಸ್ತೆಯ ಆಗುಂಬೆ ಘಾಟ್ ಪ್ರದೇಶದ 76.80 ಕಿ.ಮೀ.ನಿಂದ 79.30ಕಿ.ಮೀ.ವರೆಗಿನ ಭಾಗದ ರಸ್ತೆಯ ಡಾಂಬರೀಕರಣ ಕಾಮಗಾರಿಗಾಗಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸುಮಾರು ಒಂದು ತಿಂಗಳ ಕಾಲಾವಕಾಶಬೇಕಾಗಿರುವುದರಿಂದ ಇಂದಿನಿಂದ ಡಿ.31ರವರೆಗೆ ತೀರ್ಥಹಳ್ಳಿ ಯಿಂದ ಉಡುಪಿ, ಕಾರ್ಕಳಕ್ಕೆ ಆಗುಂಬೆ ಘಾಟಿ ರಸ್ತೆ ಮೂಲಕ ಸಂಚರಿಸುವ ವಾಹನಗಳು ರಾ.ಹೆದ್ದಾರಿ 13ರ ಮೂಲಕ ಕೊಪ್ಪ, ಶೃಂಗೇರಿ, ಬಜಗೋಳಿ ಮುಖಾಂತರ ಉಡುಪಿಗೆ ಹಾಗೂ ಉಡುಪಿ ಕಾರ್ಕಳದಿಂದ ಆಗುಂಬೆ ಘಾಟಿ ಮಾರ್ಗವಾಗಿ ತೀರ್ಥಹಳ್ಳಿ ಕಡೆ ಚಲಿಸುವ ವಾಹನಗಳು ಬಜಗೋಳಿ, ಶೃಂಗೇರಿ, ಕೊಪ್ಪ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 13ರ ಮೂಲಕ ತೀರ್ಥಹಳ್ಳಿಗೆ ಸಂಚರಿಸಬಹುದು.
ಅಲ್ಲದೇ ತೀರ್ಥಹಳ್ಳಿಯಿಂದ ಕುಂದಾಪುರ/ಬೈಂದೂರು ಕಡೆ ಚಲಿಸುವ ವಾಹನಗಳು ಮಾಸ್ತಿಕಟ್ಟೆ, ಬಾಳೆಬರೆ ಘಾಟಿ, ಸಿದ್ಧಾಪುರ-ಕಂಡ್ಲೂರು ಮುಖಾಂತರ ಅದೇ ರೀತಿ ಕುಂದಾಪುರದಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳು ಕಂಡ್ಲೂರು- ಸಿದ್ಧಾಪುರ, ಬಾಳೆಬರೆ ಘಾಟಿ, ಮಾಸ್ತಿಕಟ್ಟೆ ಮಾರ್ಗವಾಗಿ ಸಂಚರಿಸುವಂತೆ ಮಾರ್ಗಗಳನ್ನು ತಾತ್ಕಾಲಿಕವಾಗಿ ಬದಲಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.