ಕೊಲೆ ಪ್ರಕರಣ : ಇಬ್ಬರ ಬಂಧನ
ಕಾಸರಗೋಡು , ಡಿ.8 : ಬೋವಿಕ್ಕಾನದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೋವಿಕ್ಕಾನ ಮೊದಲ ಮುದಲಪ್ಪಾರದ ಅಹಮ್ಮದ್ ನಾಸಿರ್ ( 33) ಮತ್ತು ಮುಳಿಯಾರು ಬಾಲನಡ್ಕದ ಸಾಲಿ ( 26) ಎಂದು ಗುರುತಿಸಲಾಗಿದೆ.
ಪೊವ್ವಲ್ ನ ಅಬ್ದುಲ್ ಖಾದರ್ ( 19) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಐದು ಮಂದಿ ಶಾಮೀಲಾಗಿದ್ದು , ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ.
ಡಿ.1ರಂದು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಕೃತ್ಯ ನಡೆದಿತ್ತು .
ಕ್ಲಬ್ ಗಳ ನಡುವೆ ನಡೆದ ಗುಂಪು ಘರ್ಷಣೆ ಯಲ್ಲಿ ಅಬ್ದುಲ್ ಖಾದರ್ ಕೊಲೆಗೈಯ್ಯಲ್ಪಟ್ಟು, ಜೊತೆಗಿದ್ದ ಆಸಿಯಾದ್ ಮತ್ತು ಸತ್ತಾದ್ ಅನಾಸ್ ಗಂಭೀರ ಗಾಯಗೊಂಡಿದ್ದರು .
ಕೃತ್ಯದ ಬಳಿಕ ತಲೆಮರೆರೆಸಿಕೊಂಡಿದ್ದ ಆರೋಪಿಗಳು ಊರಿಗೆ ಮರಳಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಆರೋಪಿಗಳನ್ನು ಬಂಧಿಸಲಾಗಿದೆ .
Next Story