ಬೆಳ್ಳಾರೆ ಝಕಾರಿಯಾ ಜಮಾತ್ ಮಸ್ಜಿದ್ ಆಡಳಿತ ಮಂಡಳಿಗೆ ಚುನಾವಣಾ ಅಧಿಸೂಚನೆ ಪ್ರಕಟ
ಸುಳ್ಯ , ಡಿ.15 : ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಝಕಾರಿಯಾ ಜಮಾತ್ ಮಸ್ಜಿದ್ನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಆದೇಶದ ಪ್ರಕಾರ ಚುನಾವಣಾಧಿಕಾರಿಯಾಗಿ ನೇಮಕ ಗೊಂಡ ರಾಜ್ಯ ವಕ್ಫ್ ಮಂಡಳಿಯ ಲೆಕ್ಕಾಧಿಕಾರಿ ನಝೀರ್ ಅಹಮ್ಮದ್ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಆಡಳಿತ ಮಂಡಳಿಗೆ 11ಜನ ಸದಸ್ಯರನ್ನು ಆರಿಸಲು ಡಿ.23ರಿಂದ ಅರ್ಜಿಸಲ್ಲಿಸಬಹುದಾಗಿದೆ.
ಅರ್ಜಿ ಸ್ವೀಕಾರಕ್ಕೆ ಕಡೆಯ ದಿನಾಂಕ ಡಿ.29, ನಾಮಪತ್ರ ಪರಿಶೀಲನೆ ಮತ್ತು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಡಿ.30 ಪ್ರಕಟಿಸಲಾ ಗುವುದು. ನಾಮಪತ್ರ ಹಿಂದಕ್ಕೆ ಪಡೆಯಲು ಡಿ.31 (ಸಂಜೆ 3ಗಂಟೆ) ಕೊನೆಯ ದಿನಾಂಕವಾಗಿದ್ದು, ಅದೇ ದಿನ ನಾಮಪತ್ರ ವಾಪಾಸು ಪಡೆದವರ ಪಟ್ಟಿ ಪ್ರಕಟವಾಗಲಿದೆ.
ಜನವರಿ 8ರಂದು ಅಗತ್ಯವಾದಲ್ಲಿ ಚುನಾವಣೆ ನಿಗದಿ ಪಡಿಸಲಾಗಿದೆ. ಅದೇ ದಿನ ಸಂಜೆ 4 ಗಂಟೆಗೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣೆ ಸಂಸ್ಥೆಯ ಬೈಲಾ ನಿಯಮ -8 ಅಧ್ಯಾಯ 6ರನ್ವಯ ನಡೆಯಲಿದೆ ಎಂದು ನಝೀರ್ ಅಹಮ್ಮದ್ ತಿಳಿಸಿದ್ದಾರೆ.