ಕೆವಿಜಿ ಸುಳ್ಯ ಹಬ್ಬ ಅಂಗವಾಗಿ ಸುಳ್ಯದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ
ಸುಳ್ಯ, ಡಿ.24 : ಕೆ.ವಿ.ಜಿ ಸುಳ್ಯ ಹಬ್ಬ ಆಚರಣಾ ಸಮಿತಿ ವತಿಯಿಂದ ಸುಳ್ಯದಲ್ಲಿ ನಡೆಯುವ ಸುಳ್ಯ ಹಬ್ಬದ ಅಂಗವಾಗಿ ಸ್ವಚ್ಚತಾ ಆಂದೋಲನ ಸುಳ್ಯದ ಮುಖ್ಯ ಪೇಟೆಯಲ್ಲಿ ನಡೆಯಿತು.
ಬೆಳಗ್ಗೆ ಸುಳ್ಯದ ಶಾಸ್ತ್ರಿ ಸರ್ಕಲ್ ಬಳಿ ಸ್ವಚ್ಚತಾ ಆಂದೋಲನಕ್ಕೆ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ, ಕೆ.ವಿ.ಜಿ ಸುಳ್ಯ ಹಬ್ಬದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಧ್ವಜ ಅರಳಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕುರುಂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಇದು ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಮಾತನಾಡಿ, ಸುಳ್ಯ ಸ್ವಚ್ಚವಾಗಿದ್ದರೆ ನಮ್ಮ ಆರೋಗ್ಯವು ಸ್ವಚ್ಚತೆಯಿಂದಿರುತ್ತದೆ ಎಂದು ಹೇಳಿದರು.
ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಎಸ್.ಐ ಚಂದ್ರಶೇಖರ್, ಹಿರಿಯರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಸುಳ್ಯ ನ.ಪಂ ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಮೀನಾಕ್ಷಿ ದೇವರಕಳಿಯ, ಕೆ.ಎಂ ಮುಸ್ತಫಾ, ಪ್ರಕಾಶ್ ಹೆಗ್ಡೆ, ಗಿರೀಶ್ ಕಲ್ಲಗದ್ದೆ, ಕಿರಣ ಕುರುಂಜಿ, ಕೆ.ವಿ.ಜಿ. ಸುಳ್ಯ ಹಬ್ಬ ಪ್ರಮುಖರಾದ ಚಂದ್ರಶೇಖರ ಪೇರಾಲು, ದಿನೇಶ್ ಅಂಬೆಕಲ್ಲು, ಪಿ.ಎ ಮಹಮ್ಮದ್, ಕೆ.ಟಿ. ವಿಶ್ವನಾಥ, ಡಾ. ಹರಪ್ರಸಾದ್ ತುದಿಯಡ್ಕ, ಜಗನ್ನಾಥ ರೈ, ಹಾಜಿ ಅಬ್ಬಾಸ್ ಕಟ್ಟೆಕಾರ್, ಪಿ.ಎ ಮಹಮ್ಮದ್, ಎನ್ ಜಯಪ್ರಕಾಶ್ ರೈ, ಡಿ.ಟಿ. ದಯಾನಂದ, ವೈದ್ಯಾಧಿಕಾರಿ ಡಾ. ನಂದ ಕುಮಾರ್, ಶ್ರೀಮತಿ ಗುಣಾವತಿ ಕೊಲ್ಲಂತಡ್ಕ, ದೊಡ್ಡಣ್ಣ ಬರೆಮೇಲು, ಪ್ರೋ. ಜವರೇ ಗೌಡ, ಡಾ. ಲೀಲಾಧರ್ ಡಿ.ವಿ, ಡಾ. ಎನ್.ಎಸ್. ಶೆಟ್ಟರ್, ಸಂಜೀವ ಕುದ್ಪಾಜೆ, ಹರ್ಷ ಕರುಣಾಕರ ಸೇರ್ಕಜೆ, ಗಿರಿಜಾಶಂಕರ ತುದಿಯಡ್ಕ, ನ.ಂ ಮುಖ್ಯಾಧಿಕಾರಿ ಚಂದ್ರಕುಮಾರ್, ಸಂತೋಷ್ ಮಡ್ತಿಲ, ಲೀಲಾವತಿ ಕಾನತ್ತಿಲ, ಪ್ರಭಾಕರ ನಾಯರ್ ಹಾಗೂ ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಂದೋಲನದಲ್ಲಿ ಭಾಗವಹಿಸಿದ್ದರು.