‘ಮುಹಮ್ಮದ್(ಸ.) ಪೈಗಂಬರರು ಮಾನವರಲ್ಲಿ ಮಹೋನ್ನತರು: ಸೆಮಿನಾರ್
ಮಂಜೇಶ್ವರ, ಜ.1: ಮುಸ್ಲಿಮ್ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ‘ಮುಹಮ್ಮದ್(ಸ.) ಪೈಗಂಬರರು ಮಾನವರಲ್ಲಿ ಮಹೋನ್ನತರು’ ಎಂಬ ವಿಷಯದಲ್ಲಿ ಸೆಮಿನಾರ್ ಹಮ್ಮಿಕೊಳ್ಳಲಾಯಿತು.
ಕುಂಬಳೆ ಬಾಫಕಿ ತಂಙಳ್ ಸೌಧದಲ್ಲಿ ನಡೆದ ಸೆಮಿನಾರ್ನ್ನು ಶಾಸಕ ಪಿ.ಬಿ.ಅಬ್ದುರ್ರಝಾಕ್ ಉದ್ಘಾಟಿಸಿದರು. ಮಂಡಲಾಧ್ಯಕ್ಷ ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದರು. ಕನ್ಯಾನ ಬಾಲಕೋಡಿ ಶ್ರೀಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ, ಸಾಹಿತಿ ರಾಘವನ್ ಬೆಳ್ಳಿಪ್ಪಾಡಿ, ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ, ಡಾ.ರಾಜೇಶ್ ಆಳ್ವ, ಕೇಳು ಮಾಸ್ಟರ್, ಬಾಲಕೃಷ್ಣ ಅಗ್ಗಿತ್ತಾಯ, ಪ್ರೊ. ಶ್ರೀನಿವಾಸ್ ವಿಷಯ ಮಂಡಿಸಿ ಮಾತನಾಡಿದರು. ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ.ಕೆ.ಎಂ. ಅಶ್ರಫ್, ಮುಖಂಡರಾದ ಎಂ.ಅಬ್ಬಾಸ್, ಯೂಸುಫ್ ಉಳುವಾರು, ವಿ.ಪಿ.ಅಬ್ದುಲ್ ಖಾದರ್, ಅಶ್ರಫ್ ಕೊಡಿಯಮ್ಮ, ಬಶೀರ್, ಮುಹಮ್ಮದ್ ಕುಂಞಿ, ಝಡ್.ಎ ಕಯ್ಯಾರ್, ಸೈಯದ್ ಹಾದಿ ತಂಙಳ್, ಇರ್ಷಾದ್ ಮೊಗ್ರಾಲ್, ಮುಹಮ್ಮದ್ ಅಲಿ, ಇಬ್ರಾಹೀಂ ಬತ್ತೇರಿ, ಟಿ.ಎಂ.ಸುಹೈಬ್, ಸಿದ್ದೀಕ್, ಸವಾದ್, ಎ.ಕೆ.ಆರಿಫ್, ಕೆ.ಎಂ.ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.