ಎಸ್ಕೆಎಸೆಸೆಫ್ನಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ
ಮಂಗಳೂರು, ಜ.5: ಎಸ್ಕೆಎಸೆಸೆಫ್ ಉದ್ದಬೆಟ್ಟು ಶಾಖೆ ವತಿಯಿಂದ ಸಾರ್ವಜನಿಕ ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ದಬೆಟ್ಟು ಜುಮಾ ಮಸೀದಿಯ ಖತೀಬ್ ಶಂಶುದ್ದೀನ್ ಅಶ್ರಫಿ ಮಾಚಾರ್ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರು ದುವಾ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು. ಬದ್ರಿಯಾನಗರ ಮಸೀದಿಯ ಖತೀಬ್ ಉಬೈದುಲ್ಲಾ ಅಝ್ಹರಿ ಪಾಂಡವರಕಲ್ಲು, ಅಧ್ಯಕ್ಷ ಅಬೂಬಕರ್ ಕುದ್ರೋಳಿ, ದೆಮ್ಮೆಲೆ ಮಸೀದಿ ಖತೀಬ್ ಸಲೀಂ ಅರ್ಶದಿ ಕಜೆಮಾರ್, ಅಧ್ಯಕ್ಷ ಅಬ್ದುಲ್ ಹಕೀಂ, ಕಲಾಯಿ ಮಸೀದಿ ಖತೀಬ್ ಕೆ.ಎಲ್.ಅಹ್ಮದ್ ದಾರಿಮಿ, ಉದ್ದಬೆಟ್ಟು ಮಸೀದಿ ಅಧ್ಯಕ್ಷ ಎಂ.ಮುಹಮ್ಮದ್, ಎಸ್ಕೆಎಸೆಸೆಫ್ ಉದ್ದಬೆಟ್ಟು ಶಾಖೆಯ ಅಧ್ಯಕ್ಷ ಇಸ್ಮಾಯೀಲ್, ಎಸ್ಕೆಎಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಕಮ್ಮಾಜೆ, ಎಸ್ಕೆಎಸೆಸೆಫ್ ಅಮ್ಮುಂಜೆ ಕ್ಲಸ್ಟರ್ ಅಧ್ಯಕ್ಷ ನಿಸಾರ್ ಕಲಾಯಿ, ಗುರುಪುರ ಮದ್ರಸ ಮ್ಯಾನೇಜ್ಮೆಂಟ್ ಸದಸ್ಯ ಸಾಹುಲ್ ಹಮೀದ್, ಮಲ್ಲೂರು ಗ್ರಾ.ಪಂ.ಸದಸ್ಯ ಡಿ.ಹಾಮದ್, ಅಬ್ದುಲ್ಲಾ ಬೊಲ್ಲಂಕಿಣಿ ಉಪಸ್ಥಿತರಿದ್ದರು.
ಎಸ್ಕೆಎಸೆಸೆಫ್ ಉದ್ದಬೆಟ್ಟು ಶಾಖೆಯ ಜೊತೆ ಕಾರ್ಯದರ್ಶಿ ನಾಸಿರ್ ಬೊಲ್ಲಂಕಿಣಿ ಕಾರ್ಯಕ್ರಮ ನಿರೂಪಿಸಿದರು.