ಜ.15ರಂದು ವೃಂದಾವನ ವಸತಿ ಸಮುಚ್ಚಯ ಲೋಕಾರ್ಪಣೆ
ಮಂಗಳೂರು,ಜ.11: ನಿಧಿ ಬಿಲ್ಡರ್ ಮತ್ತು ಡೆವಲಪರ್ಸ್ ಸಂಸ್ಥೆಯ ವತಿಯಿಂದ ನಗರದ ಮಣ್ಣಗುಡ್ಡೆ ಬಳಿ ನಿರ್ಮಿಸಲಾದ ವೃಂದಾವನ ವಸತಿ ಸಮುಚ್ಚಯ ಜ.15ರಂದು ಸಂಜೆ 6.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರವರ್ತಕರಾದ ಪ್ರಶಾಂತ್ ಕುಮಾರ್ ಸನಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಸಮುಚ್ಚಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೋ, ಕ್ಯಾ.ಗಣೇಶ್ ಕಾರ್ನಿಕ್, ಮೇಯರ್ ಹರಿನಾಥ್, ರಾಜ್ಯ ಧಾರ್ಮಿಕ ಪರಿಷತ್ನ ಸದಸ್ಯ ಪದ್ಮನಾಭ ಕೋಟ್ಯಾನ್, ಮನಪಾ ಸದಸ್ಯೆ ಜಯಂತಿ ಆಚಾರ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬ್ರಹ್ಮ ಕುಮಾರೀಸ್ ಮಂಗಳೂರು ಇದರ ಮುಖ್ಯಸ್ಥರಾದ ಬಿ.ಕೆ.ವಿಶ್ವೇಶ್ವರಿ ಆಶೀರ್ವವದಿಸಲಿದ್ದಾರೆ. ಮಣ್ಣ ಗುಡ್ಡೆಯ ಸುಮಾರು 1.7 ಎಕ್ರೆ ವಿಸ್ತೀರ್ಣದಲ್ಲಿ ವಿಶ್ವ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಉತ್ಕೃಷ್ಟ ಗುಣ ಮಟ್ಟದ 2ಬಿಎಚ್ಕೆ, 3ಬಿಎಚ್ಕೆ ಯ 109 ಯೂನಿಟ್ಗಳನ್ನು ಹೊಂದಿರುವ ವಸತಿ ಸಮುಚ್ಚಯ ಹವಾನಿಯಂತ್ರಿತ ಒಳಾಂಗಣ, 4 ಶುದ್ಧ ನೀರಿನ ಘಟಕಗಳು, ಕೊಳವೆ ಬಾವಿ, ನಳ್ಳಿನೀರಿನ ಸಂಪರ್ಕ ,ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಹವಾನಿಯಂತ್ರಿತ ಒಳಾಂಗಣ, ಬಿಲಿಯರ್ಡ್ಸ್, ಕೇರಂ ಲೂಡೋ, ಚದುರಂಗ ಸೇರಿದಂತೆ ವಿವಿಧ ಕ್ರೀಡಾ ವ್ಯವಸ್ಥೆ, ಯೋಗ ಧ್ಯಾನದ ಕೊಠಡಿಗಳು, ಜಿಮ್, ಈಜುಕೊಳ, ಆ್ಯಂಪಿಥಿಯೇಟರ್ ಜಾಗಿಂಗ್ ಪಾರ್ಕ್, ಹಿರಿಯ ನಾಗರಿಕರಿಗೆ ಮಿನಿ ಉದ್ಯಾನವನ. ಸುತ್ತಲು ಹಸುರಿನ ಹಾಸು ಮತ್ತು ಗಿಡಗಳ ಆವರಣ, ನೀರಿನ ಝರಿ, ಲಕ್ಸುರಿ ಮನೆಗಳ ವಿನ್ಯಾಸ, ಮಕ್ಕಳ ಆಟದ ಅಂಗಳ, ಗರಿಷ್ಠ ಸುರಕ್ಷತೆ, ಪ್ರತಿಯೊಂದು ಪ್ಲಾಟ್ಗಳಿಗೂ ಸೆನ್ಸಾರ್ ಸಿಸ್ಟಮ್ನ ಪ್ರವೇಶ ದ್ವಾರ, 77 ಸಿ.ಸಿ ಕೆಮಾರಾಗಳು ಪಕ್ಕದಲ್ಲಿಯೇ ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ ಉದ್ಯಾನವನ, ಕ್ರೀಡಾಂಗಣ, ಕೇಂದ್ರ ಬಸ್ನಿಲ್ದಾಣ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುಮಾರು 3 ಕಿ.ಮೀ ದೂರದಲ್ಲಿ ರೈಲು ನಿಲ್ದಾಣವಿದೆ. ಗ್ರಾಹಕರಿಗೆ ಗರಿಷ್ಠ ಸಂತೃಪ್ತಿ ನೀಡುವುದು ನಮ್ಮ ಗುರಿಯಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಯೋಜನೆಯ ನಿರ್ಮಾತೃಗಳಾದ ಪ್ರಶಾಂತ್ ಕುಮಾರ್ ಸನಿಲ್, ಶರಶ್ಚಂದ್ರ ಸನಿಲ್ ಸಹೋದರರು ಬಿಜೈಯಲ್ಲಿರುವ ನಿಧಿ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಸಂಸ್ಥೆಯನ್ನು ಹೊಂದಿದ್ದು ಕಟ್ಟಡ ನಿರ್ಮಾಣ ಕ್ಷೇತ್ರದ ತಜ್ಞರ ತಂಡವನ್ನು ಹೊಂದಿದೆ. ಹೆಚ್ಚಿನ ವಿವರಗಳನ್ನು www.nidhiland.com ಸಂಪರ್ಕಿಸಿ ಪಡೆಯಬಹುದು ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಸಂಸ್ಥೆಯ ಯೋಜನಾ ನಿರ್ದೇಶಕ ಕಿಶೋರ್ .ಪಿ, ಕಾನೂನು ಸಲಹೆಗಾರರಾದ ನಯನಾ ಪೈ ಮೊದಲಾದವರು ಉಪಸ್ಥಿತರಿದ್ದರು.