ಸುರತ್ಕಲ್: ನಾಳೆ ಜನಸಂಪರ್ಕ ಸಭೆ
ಮಂಗಳೂರು, ಜ.17: ಮಂಗಳೂರು ತಾಲೂಕು ಮಟ್ಟದ ಜನಸಂಪರ್ಕ ಸಭೆ ಜ.19ರಂದು ಬೆಳಗ್ಗೆ 10:30ಕ್ಕೆ ಸುರತ್ಕಲ್ನ ಬಂಟರ ಭವನದಲ್ಲಿ ಶಾಸಕ ಬಿ.ಎ.ಮೊಯ್ದಿನ್ ಬಾವ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ಮಂಗಳೂರು ತಾಲೂಕು ಕಚೇರಿಯ (ಮಿನಿಧಾನ ಸೌಧ) ವಿಶೇಷ ಕೌಂಟರ್ನಲ್ಲಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story