ಬಾವಿಗೆ ಬಿದ್ದು ಮೃತ್ಯು
ಬೈಂದೂರು, ಜ.23: ತೋಟಕ್ಕೆ ನೀರು ಬಿಡಲು ಹೋದ ಯುವಕ ನೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜ.22ರಂದು ಬೆಳಗ್ಗೆ ಕಾಲ್ತೋಡು ಗ್ರಾಮದ ಕುರುಕುಂಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕಾಲ್ತೋಡಿನ ಸುಧಾಕರ ಶೆಟ್ಟಿ(22) ಎಂದು ಗುರುತಿಸಲಾಗಿದೆ. ಕೃಷಿ ತೋಟಕ್ಕೆ ನೀರು ಬೀಡಲೆಂದು ಹೋಗಿದ್ದ ಸುಧಾಕರ ಶೆಟ್ಟಿ ತೋಟದಲ್ಲಿ ರುವ ಬಾವಿಗೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story